Skip to main content

ಜಾಝ್ ಪದ್ಯ-೨

 

ಜಾಝ್ ಪದ್ಯ-೨


ಮೂಲ - ಕಾರ್ಲ್ ವೆಂಡಾಲ್ ಹೈನಸ್
ಕನ್ನಡಕ್ಕೆ - ಶಿವಕುಮಾರ ಹಿರೇಮಠ

ಕಂಡೆಯಾ? ಅದೋ ಅಲ್ಲಿ ನಿಂತಿಹನವನು;
(ಕೋಲ್ರಿಡ್ಜ್ ನ )ಪುರಾತನ ಕಪ್ಪು ವರ್ಣಿಯ
ನಾವಿಕನ ತೆರದಿ
ಬಾಳಿನುದ್ದಕೂ ಅದೆಷ್ಟೋ ಸಂತಪ್ತತೆ ತುಂಬಿಕೊಂಡಿಹ
ಮುದಿ ಮೊಗದೊಂದಿಗೆ; ನೇತ್ರಗಳು ಮುಚ್ಚಿಕೊಂಡಿವೆ.
ನೂಲುಬಿಚ್ಚಿಹ ಅವನ ಕೊರಳಪಟ್ಟಿಯೂ
ಬೆವರಿನಿಂದ ಕಪ್ಪಿಟ್ಟಿಹ ಹಳೆಯ ನೀಲಿ ಷರಾಯಿಯೂ
ಮತ್ತೆ, ಸಡಿಲಗೊಂಡು ಅಸಂಬದ್ದವಾಗಿ
ಜೋತುಬಿದ್ದಿಹ ಕೊರಳ ಕಂಠಪಟ್ಟಿಯೂ;
ಜೊತೆಗೆ, ಜೋತುಬಿದ್ದಿಹ ಅವನುದರವನ್ನು
ಕೇವಲ ಎತ್ತಿ ಹಿಡಿಯಲಷ್ಟೇ ಶಖ್ಯವಾದ
ಚಿಂದಿಯಾಗಿಹ ಮೇಲಂಗಿಯೂ...
ಹೌದು. ಅವನ ಬೂಟುಗಳಲ್ಲಿ
ಕಾಗದದ ತುಣುಕುಗಳಿವೆ,
ತೂತುಗಳ ಮುಚ್ಚಲೆಂದು.
ಹಾಗೆಯೇ, ನೋವು ಇಣುಕುತಿದೆ
ಅವನ ಕ್ಷೌರವಿಲ್ಲದ ಒರಟು ಮುಖದಲ್ಲಿನ
ಪ್ರತಿ ಸುಕ್ಕಿನಲ್ಲಿಯೂ
ಇಷ್ಟಿದ್ದರೂ ಅವನು ನಿಂತಿಹನು ಅಲ್ಲೇ
ತನ್ನಷ್ಟಕೆ ತಾನೇ ತಂದುಕೊಂಡ ಒಂಟಿತನದೊಡನೆ
ಈಗಲೂ ಶಿರವು ಬಾಗಿದೆ ಕಣ್ಣು ಮುಚ್ಚಿವೆ
ಮಂದ್ರ ಶೃತಿಗೆ ಅಣಿಗೊಂಡ ಕಿವಿಗಳು ಚುರುಕುಗೊಂಡಿವೆ
ತಾರು ಹೊದಿಕೆಯ ತೂಗದಾರದ ಆಧಾರದಲಿ
ಎದೆಗಡ್ಡಲಾಗಿ ಕೊರಳಿಂದ ನೇತುಬಿದ್ದ
ಆಲ್ಟೋ ಸ್ಯಾಕ್ಸೋಪೋನು...
ಕಂಡೆಯಾ?ಮೆಲ್ಲಗೆ ಅದನ್ನೆತ್ತಿಕೊಂಡು
ಅರೆತೆರೆದ ತುಟುಗಿಡುತಿರುವುದ

ಕರಿಯರ ಸುವಾರ್ತೆಯ
ಜಾಝ್ ಸಂಗೀತವನ್ನು ಜಗದೆಲ್ಲೆಡೆ ಸಾರಲೆಂದು
ಧರೆಗವತರಿಸಿಹ ಕಪ್ಪುವರ್ಣಿಯನು ತಾನಾಗಿಹನು
ಅದನುಡಿಯಲು ಶುರುವಿಡಲು
ಸ್ವರ ಚೀತ್ಕಾರದ ಇಂಚರದುಲಿಯೊಳು
ಕೇವಲ ಮಾನವಲ್ಲನವನೀಗ
ಕಪ್ಪುವರ್ಣಿಯನೂ ಸಹ ಅಲ್ಲ
ಹಾಗಾದರೆ (ಓಹ್ ಅಹುದು!) ಒಂದು ಖೇಚರ
ಹಾಗೆ ತನ್ನ ರೆಕ್ಕೆಗಳನ್ನೊಗ್ಗೂಡಿಸಿ
ಎತ್ತರಕ್ಕಿಂತ
ಎತ್ತರ
ಎತ್ತರಕ್ಕೆ ಹಾರುತ ಲೀನವಾಗಿಬಿಡುವನು
ಇಲ್ಲವೆ
ಮರಳಿಬರುವನು
ಮತ್ತೆ ತನ್ನ ತಾ ಕಪ್ಪುವರ್ಣಿಯನಾಗಿ ಕಂಡುಕೊಳ್ಳಲು

Comments

Popular posts from this blog

ರೈತ ಚೀತ್ಕಾರ

[09/04, 12:43 p.m.] ಭಾವಗೀತೆ * ರೈತ ಚೀತ್ಕಾರ * ಕನಸೇ ಕಮರಿಹೋಯಿತು ಬದುಕೇ ಬಾಡಿಹೋಯಿತು ರೈತನಾಗಿ ಹುಟ್ಟಬಾರದೋ ಮತ್ತೆ ರೈತನಾಗಿ ಹುಟ್ಟಬಾರದೋ||ಪ|| ಸಾಲ ಮಾಡಿ ಎತ್ತೊಂದ ತಂದೆ ಸಿಡಿಲು ಬಡಿದು ಸತ್ತಿತಲ್ಲೋ ದೇವ ನಿನ್ನ ಕರುಣೆ ಎಲ್ಲೊ ಜಂಘಾಬಲ ಉಡುಗಿತಲ್ಲೋ ನನ್ನ ಬಲವೆಲ್ಲ ಕುಸಿಯಿತಲ್ಲೋ||೧|| ಚಿನ್ನದ ಬೆಳೆಯು ನೂರಾಸೆ ತೋರಿ ಅತಿವೃಷ್ಟಿಗೆ ಸಿಲುಕಿತಲ್ಲೋ ಕೆಸರ ಸೇರಿ ಕೊಳೆಯಿತಲ್ಲೋ ಸಾಲ ದೆವ್ವವಾಯಿತಲ್ಲೋ ಕಣ್ಣಲಿ ನೆತ್ತಾರ ತಂದಿತಲ್ಲೋ ||೨|| ಆಳೋ ಜನಕೆ ಅಧಿಕಾರದಾಸೆ ಮತಕಾಗಿ ನೆನೆದುಬರುವರೋ ಪೊಳ್ಳು ಬರವಸೆಯ ತೂರಿಬಿಡುವರೋ ಉಳುವವನಿಗೆ ಆಸರೆ ಯಾರೋ ಯಮ ಕಿಂಕರರು ಬಂದು ನಿಂತರೋ||೩|| ✍ *ತ್ರಿನೇತ್ರಜ*

*ಅನುಪಮ*

ಹನಿ ಹನಿ ತುಂತುರು ತಿಂಗಳ ವಿಶೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಭಾವಗೀತೆ         *ಅನುಪಮ*        ಹೆಣ್ಣಾಗಿ ಮೂಡಿಹಳು ಅದಮ್ಯ ಸೌಮ್ಯ ಶಕ್ತಿಯೇ ಬಣ್ಣಿಸಲು ಅಸದಳವೊ ಭಾವನಾ ಅಂಬುದಿಯೇ |ಪ| ಮಗುವಾಗಿ ನಗುವಾಗಿ ಅಮಿತ ಅನಿತೆ ಪೂಜಿತೆ ಒಡಹುಟ್ಟಿದ ಜೀವಗಳಿಗೆ ಮಿಡಿವ ಪ್ರೇಮ ಶೋಭಿತೆ|೧| ಸ್ನೇಹ ತೋರಿ ಸಖಿಯಾಗಿ ಹೃದಯಗೆದ್ದ ಅರಸಿಯಾಗಿ ಬಾಳಿನ ಅರ್ಧಾಂಗಿಯಾಗಿ ಬಾಳಿಸುವಳು ಗೃಹಿಣಿಯಾಗಿ|೨| ಮನ ನಿನ್ನದು ಹೂವಂತೆ ತನುವದೋ ಲತೆಯಂತೆ ಬರಡನಳಿಸೊ ಸೆಲೆಯಂತೆ ಮನೆಗೆ ನಂದಾ ದೀಪದಂತೆ |೩| ಮಮತೆಗೆ ಮಾತೃರೂಪಿಣಿ ಕ್ಷಮೆಗೆ ಭೂ ಸ್ವರೂಪಿಣಿ ಜ್ಞಾನದೊಳು ಶ್ರೀ ವಾಣಿ ನಮಿಸುವೆ ಸೃಷ್ಟಿಕಾರಿಣಿ |೪|        ................. ✍🏼 ತ್ರಿನೇತ್ರಜ  ಶಿವಕುಮಾರ. ಹಿರೇಮಠ. 🥀🥀🥀🥀🥀 ಹನಿ ಹನಿಯ ತುಂತುರು ಕಾವ್ಯ ಲೋಕದಲಿ... ಮೈಮರೆಸುವ ಕವಿಹೃದಯಗಳ ಕಾವ್ಯಗಳ ಸಾಗರ ದಲ್ಲಿ ಮನವಿಂದು ಮಿಂದು ಧನ್ಯವಾಗಿದೆ... 🦋🦋🦋🦋🦋🦋 *ಹನಿ ಹನಿ ತುಂತುರು ತಿಂಗಳ ವಿಶೇಷ ಸ್ಪರ್ಧೆಯ ಫಲಿತಾಂಶಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಸುಸ್ವಾಗತ...*  *ಈ ತಿಂಗಳ  ಸ್ಪರ್ಧೆಯ ವಿಷಯ* *ಒಂದು ಹೆಣ್ಣು ಗಂಡಿನ ಜೀವನದಲ್ಲಿ ತಾಯಿಯಾಗಿ ತಂಗಿಯಾಗಿ ಮಡದಿಯಾಗಿ ಗೆಳತಿಯಾಗಿ ತಂಗಿಯಾಗಿ ಪ್ರೇಯಸಿಯಾಗಿ ಹೆಂಡತಿಯಾಗಿ ಗಂಡಿನ...

*ಆನಂದನ ಗರ್ವಭಂಗ*

ಮಕ್ಕಳ ಗೀತೆ  *ಆನಂದನ ಗರ್ವಭಂಗ*  ಆಂಟಿಯ ಜೊತೆಗೆ ಪೇಟೆಗ್ಹೋಗಿ ಬೆಲೂನು ತಂದನು ಆನಂದ ಬೀದಿ ಮಕ್ಕಳ ಹೊಟ್ಟೆ ಉರಿಸಲು ಅವನಿಗೆ ಅದೇನೋ ಆನಂದ ಜಂಭದಿ ನಡೆದನು ಆಡುತ ಪುಗ್ಗೆಯ ಡುಬ್ಡುಬ್ ಡುಬ್ ಟುಬ್ ಬಡಿಯುತ್ತ ತನಗೆ ಸರಿಸಮ ಯಾರಿಲ್ಲೆಂದು ಎರಡ್ಹೆಜ್ಜೆಗೆ ಒಂದ್ಸಾರಿ ನೆಗೆಯುತ್ತ. ಅವನಾರ್ಭಟಕೆ ಬೀದಿಯ ನಾಯಿ ಗುರುಗುಟ್ಟಿ ಎಗರಿತು ಬೌ ಎಂದು ಚಿಟ್ಟನೆ ಚೀರಿ ಕೈಬಿಟ್ಟು ಬೆಲೂನು ಬೊಬ್ಬಿಟ್ಟನು ಬೆದರಿ ಆನಂದು ಹಾರಿತು ಪುಗ್ಗೆಯು ಎತ್ತರೆತ್ತರಕ್ಕೆ ತೆಂಗಿನ ಗರಿಚುಚ್ಚಿ ಢಬ್ಬ್ ಅಂತು ಮಕ್ಕಳೆಲ್ಲರೂ ಪಕಪಕ ನಕ್ಕರು ಆನಂದನ ಜಂಭವು ಠ್ಠುಸ್ಸಂತು ........ ....... ...... ....... ✍🏼 ತ್ರಿನೇತ್ರಜ್ ಶಿವಕುಮಾರ. ಹಿರೇಮಠ