*ರೈತ ಚೀತ್ಕಾರ*
ಕನಸೇ ಕಮರಿಹೋಯಿತು
ಬದುಕೇ ಬಾಡಿಹೋಯಿತು
ರೈತನಾಗಿ ಹುಟ್ಟಬಾರದೋ
ಮತ್ತೆ ರೈತನಾಗಿ ಹುಟ್ಟಬಾರದೋ||ಪ||
ಬದುಕೇ ಬಾಡಿಹೋಯಿತು
ರೈತನಾಗಿ ಹುಟ್ಟಬಾರದೋ
ಮತ್ತೆ ರೈತನಾಗಿ ಹುಟ್ಟಬಾರದೋ||ಪ||
ಸಾಲ ಮಾಡಿ ಎತ್ತೊಂದ ತಂದೆ
ಸಿಡಿಲು ಬಡಿದು ಸತ್ತಿತಲ್ಲೋ
ದೇವ ನಿನ್ನ ಕರುಣೆ ಎಲ್ಲೊ
ಜಂಘಾಬಲ ಉಡುಗಿತಲ್ಲೋ
ನನ್ನ ಬಲವೆಲ್ಲ ಕುಸಿಯಿತಲ್ಲೋ||೧||
ಸಿಡಿಲು ಬಡಿದು ಸತ್ತಿತಲ್ಲೋ
ದೇವ ನಿನ್ನ ಕರುಣೆ ಎಲ್ಲೊ
ಜಂಘಾಬಲ ಉಡುಗಿತಲ್ಲೋ
ನನ್ನ ಬಲವೆಲ್ಲ ಕುಸಿಯಿತಲ್ಲೋ||೧||
ಚಿನ್ನದ ಬೆಳೆಯು ನೂರಾಸೆ ತೋರಿ
ಅತಿವೃಷ್ಟಿಗೆ ಸಿಲುಕಿತಲ್ಲೋ
ಕೆಸರ ಸೇರಿ ಕೊಳೆಯಿತಲ್ಲೋ
ಸಾಲ ದೆವ್ವವಾಯಿತಲ್ಲೋ
ಕಣ್ಣಲಿ ನೆತ್ತಾರ ತಂದಿತಲ್ಲೋ ||೨||
ಅತಿವೃಷ್ಟಿಗೆ ಸಿಲುಕಿತಲ್ಲೋ
ಕೆಸರ ಸೇರಿ ಕೊಳೆಯಿತಲ್ಲೋ
ಸಾಲ ದೆವ್ವವಾಯಿತಲ್ಲೋ
ಕಣ್ಣಲಿ ನೆತ್ತಾರ ತಂದಿತಲ್ಲೋ ||೨||
ಆಳೋ ಜನಕೆ ಅಧಿಕಾರದಾಸೆ
ಮತಕಾಗಿ ನೆನೆದುಬರುವರೋ
ಪೊಳ್ಳು ಬರವಸೆಯ ತೂರಿಬಿಡುವರೋ
ಉಳುವವನಿಗೆ ಆಸರೆ ಯಾರೋ
ಯಮ ಕಿಂಕರರು ಬಂದು ನಿಂತರೋ||೩||
✍ *ತ್ರಿನೇತ್ರಜ*
ಮತಕಾಗಿ ನೆನೆದುಬರುವರೋ
ಪೊಳ್ಳು ಬರವಸೆಯ ತೂರಿಬಿಡುವರೋ
ಉಳುವವನಿಗೆ ಆಸರೆ ಯಾರೋ
ಯಮ ಕಿಂಕರರು ಬಂದು ನಿಂತರೋ||೩||
✍ *ತ್ರಿನೇತ್ರಜ*

Comments
Post a Comment