Skip to main content

*ದಿವ್ಯಾಂಗರ ಮನದಿಂದ*




 *ದಿವ್ಯಾಂಗರ ಮನದಿಂದ*
.... .... .... .... ..... ..... ....
ಮನನೊಂದು ಹಾಡಿಹೆವು ಈ .
ಕೇಳುವಿರಿ ನೀವೆಂದು ಭಾವಿಸಿಹೆವು.|ಪ|

ಕಣ್ಣಿಲ್ಲ ,ಕಿವಿ ಇಲ್ಲ ,ಕೈಯಿಲ್ಲ, ಕಾಲಿಲ್ಲ;
ಎಂಬ ನೋವು ಎಮಗೆ ಎನಿತು ಇಲ್ಲ.
ಸೃಷ್ಟಿಕರ್ತನ ಬಯಕೆ, ಇಷ್ಟೇ ಸಾಕೆಮಗೆ.|೧|

ಬೇಸರವಿದೆ ಮನಕೆ ನಿಮ್ಮ ನೋಟಗಳಿಂದ,
ನೋವಾಗುವುದೆಮಗೆ ಕುಹಕ ನುಡಿಯಿಂದ.
ಬೇಡೆಮಗೆ ಅನುಕಂಪ, ಮನವಿ ಇದು ನಮ್ಮಿಂದ;

ಅವಕಾಶಗಳ ನಮಗೆ ಕೊಟ್ಟು ನೋಡಿ.
ಸಾಧಿಸುವೆವು ನಿಮ್ಮಂತೆ ಕಾರ್ಯ ಮಾಡಿ.|೨|
.... ... ... .... .... ... .....
..✍🏼 ತ್ರಿನೇತ್ರಜ.

ಶಿವಕುಮಾರ. ಹಿರೇಮಠ.
*****************************
##########################
ಶೀರ್ಷಿಕೆ : *ದಿವ್ಯಾಂಗರು ದೇವರ ಮಕ್ಕಳು*
ಕವಿ: ತ್ರಿನೇತ್ರಜ.
(ಶಿವಕುಮಾರ. ಹಿರೇಮಠ)
ಪ್ರಕಾರ: ಭಾವಗೀತೆ.
ಭಾಷೆ: ಕನ್ನಡ.
.... .... .... .... ..... ..... ....
ಮನನೊಂದು ಹಾಡಿದೆನು ಈ ಹಾಡನು.
ಕೇಳುವಿರಿ ನೀವೆಂದು ಭಾವಿಸುವೆನು.
||ಮನನೊಂದು||

ಕಣ್ಣಿಲ್ಲ ,ಕಿವಿಯಿಲ್ಲ ,ಕೈಯಿಲ್ಲ,
ಕಾಲಿಲ್ಲ;
ಎಂಬ ನೋವು ದೇವರ
ಮಕ್ಕಳಿಗಿಲ್ಲ--(೨)


ಸೃಷ್ಟಿಕರ್ತನ ಬಯಕೆ,ಸ್ವೀಕರಿಸಿಹರೆಲ್ಲ.  
 ||ಮನನೊಂದು||


ಬೇಸರವಿದೆ ಮನಕೆ ನಿಮ್ಮ
ನೋಟಗಳಿಂದ,
ನೋವಾಗುವುದು ಎದೆಗೆ
ಕುಹಕ ನುಡಿಯಿಂದ--(೨)


ಬೇಡ ನಿಮ್ಮ ಅನುಕಂಪ, ಮನವಿ ಇದು
ನನ್ನಿಂದ;
ಅವಕಾಶಗಳನ್ನವರಿಗೆ ಕೊಟ್ಟು ನೋಡಿ.
ಸಾಧಿಸುವರು ನಿಮ್ಮಂತೆ--೨
ಕಾರ್ಯ ಮಾಡಿ.    ||ಮನನೊಂದು||
.... ... ... .... .... ... .....
 *..✍🏼 ತ್ರಿನೇತ್ರಜ.*

 _ಶಿವಕುಮಾರ್ ಹಿರೇಮಠ_

Comments

Popular posts from this blog

ರೈತ ಚೀತ್ಕಾರ

[09/04, 12:43 p.m.] ಭಾವಗೀತೆ * ರೈತ ಚೀತ್ಕಾರ * ಕನಸೇ ಕಮರಿಹೋಯಿತು ಬದುಕೇ ಬಾಡಿಹೋಯಿತು ರೈತನಾಗಿ ಹುಟ್ಟಬಾರದೋ ಮತ್ತೆ ರೈತನಾಗಿ ಹುಟ್ಟಬಾರದೋ||ಪ|| ಸಾಲ ಮಾಡಿ ಎತ್ತೊಂದ ತಂದೆ ಸಿಡಿಲು ಬಡಿದು ಸತ್ತಿತಲ್ಲೋ ದೇವ ನಿನ್ನ ಕರುಣೆ ಎಲ್ಲೊ ಜಂಘಾಬಲ ಉಡುಗಿತಲ್ಲೋ ನನ್ನ ಬಲವೆಲ್ಲ ಕುಸಿಯಿತಲ್ಲೋ||೧|| ಚಿನ್ನದ ಬೆಳೆಯು ನೂರಾಸೆ ತೋರಿ ಅತಿವೃಷ್ಟಿಗೆ ಸಿಲುಕಿತಲ್ಲೋ ಕೆಸರ ಸೇರಿ ಕೊಳೆಯಿತಲ್ಲೋ ಸಾಲ ದೆವ್ವವಾಯಿತಲ್ಲೋ ಕಣ್ಣಲಿ ನೆತ್ತಾರ ತಂದಿತಲ್ಲೋ ||೨|| ಆಳೋ ಜನಕೆ ಅಧಿಕಾರದಾಸೆ ಮತಕಾಗಿ ನೆನೆದುಬರುವರೋ ಪೊಳ್ಳು ಬರವಸೆಯ ತೂರಿಬಿಡುವರೋ ಉಳುವವನಿಗೆ ಆಸರೆ ಯಾರೋ ಯಮ ಕಿಂಕರರು ಬಂದು ನಿಂತರೋ||೩|| ✍ *ತ್ರಿನೇತ್ರಜ*

*ಅನುಪಮ*

ಹನಿ ಹನಿ ತುಂತುರು ತಿಂಗಳ ವಿಶೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಭಾವಗೀತೆ         *ಅನುಪಮ*        ಹೆಣ್ಣಾಗಿ ಮೂಡಿಹಳು ಅದಮ್ಯ ಸೌಮ್ಯ ಶಕ್ತಿಯೇ ಬಣ್ಣಿಸಲು ಅಸದಳವೊ ಭಾವನಾ ಅಂಬುದಿಯೇ |ಪ| ಮಗುವಾಗಿ ನಗುವಾಗಿ ಅಮಿತ ಅನಿತೆ ಪೂಜಿತೆ ಒಡಹುಟ್ಟಿದ ಜೀವಗಳಿಗೆ ಮಿಡಿವ ಪ್ರೇಮ ಶೋಭಿತೆ|೧| ಸ್ನೇಹ ತೋರಿ ಸಖಿಯಾಗಿ ಹೃದಯಗೆದ್ದ ಅರಸಿಯಾಗಿ ಬಾಳಿನ ಅರ್ಧಾಂಗಿಯಾಗಿ ಬಾಳಿಸುವಳು ಗೃಹಿಣಿಯಾಗಿ|೨| ಮನ ನಿನ್ನದು ಹೂವಂತೆ ತನುವದೋ ಲತೆಯಂತೆ ಬರಡನಳಿಸೊ ಸೆಲೆಯಂತೆ ಮನೆಗೆ ನಂದಾ ದೀಪದಂತೆ |೩| ಮಮತೆಗೆ ಮಾತೃರೂಪಿಣಿ ಕ್ಷಮೆಗೆ ಭೂ ಸ್ವರೂಪಿಣಿ ಜ್ಞಾನದೊಳು ಶ್ರೀ ವಾಣಿ ನಮಿಸುವೆ ಸೃಷ್ಟಿಕಾರಿಣಿ |೪|        ................. ✍🏼 ತ್ರಿನೇತ್ರಜ  ಶಿವಕುಮಾರ. ಹಿರೇಮಠ. 🥀🥀🥀🥀🥀 ಹನಿ ಹನಿಯ ತುಂತುರು ಕಾವ್ಯ ಲೋಕದಲಿ... ಮೈಮರೆಸುವ ಕವಿಹೃದಯಗಳ ಕಾವ್ಯಗಳ ಸಾಗರ ದಲ್ಲಿ ಮನವಿಂದು ಮಿಂದು ಧನ್ಯವಾಗಿದೆ... 🦋🦋🦋🦋🦋🦋 *ಹನಿ ಹನಿ ತುಂತುರು ತಿಂಗಳ ವಿಶೇಷ ಸ್ಪರ್ಧೆಯ ಫಲಿತಾಂಶಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಸುಸ್ವಾಗತ...*  *ಈ ತಿಂಗಳ  ಸ್ಪರ್ಧೆಯ ವಿಷಯ* *ಒಂದು ಹೆಣ್ಣು ಗಂಡಿನ ಜೀವನದಲ್ಲಿ ತಾಯಿಯಾಗಿ ತಂಗಿಯಾಗಿ ಮಡದಿಯಾಗಿ ಗೆಳತಿಯಾಗಿ ತಂಗಿಯಾಗಿ ಪ್ರೇಯಸಿಯಾಗಿ ಹೆಂಡತಿಯಾಗಿ ಗಂಡಿನ...

*ಆನಂದನ ಗರ್ವಭಂಗ*

ಮಕ್ಕಳ ಗೀತೆ  *ಆನಂದನ ಗರ್ವಭಂಗ*  ಆಂಟಿಯ ಜೊತೆಗೆ ಪೇಟೆಗ್ಹೋಗಿ ಬೆಲೂನು ತಂದನು ಆನಂದ ಬೀದಿ ಮಕ್ಕಳ ಹೊಟ್ಟೆ ಉರಿಸಲು ಅವನಿಗೆ ಅದೇನೋ ಆನಂದ ಜಂಭದಿ ನಡೆದನು ಆಡುತ ಪುಗ್ಗೆಯ ಡುಬ್ಡುಬ್ ಡುಬ್ ಟುಬ್ ಬಡಿಯುತ್ತ ತನಗೆ ಸರಿಸಮ ಯಾರಿಲ್ಲೆಂದು ಎರಡ್ಹೆಜ್ಜೆಗೆ ಒಂದ್ಸಾರಿ ನೆಗೆಯುತ್ತ. ಅವನಾರ್ಭಟಕೆ ಬೀದಿಯ ನಾಯಿ ಗುರುಗುಟ್ಟಿ ಎಗರಿತು ಬೌ ಎಂದು ಚಿಟ್ಟನೆ ಚೀರಿ ಕೈಬಿಟ್ಟು ಬೆಲೂನು ಬೊಬ್ಬಿಟ್ಟನು ಬೆದರಿ ಆನಂದು ಹಾರಿತು ಪುಗ್ಗೆಯು ಎತ್ತರೆತ್ತರಕ್ಕೆ ತೆಂಗಿನ ಗರಿಚುಚ್ಚಿ ಢಬ್ಬ್ ಅಂತು ಮಕ್ಕಳೆಲ್ಲರೂ ಪಕಪಕ ನಕ್ಕರು ಆನಂದನ ಜಂಭವು ಠ್ಠುಸ್ಸಂತು ........ ....... ...... ....... ✍🏼 ತ್ರಿನೇತ್ರಜ್ ಶಿವಕುಮಾರ. ಹಿರೇಮಠ