Skip to main content

*ಸವಿನೆನಪ ಸವಿ*

 ಭಾವಗೀತೆ

  *ಸವಿನೆನಪ ಸವಿ* 

ಸಂಧ್ಯೆ ಮೂಡಿಬಂದಾಗ
ಪಾರಿಜಾತವರಳಿತು.
ಸೌಗಂಧಚೆಲ್ಲುತ ನಿನ್ನ
ನೆನಪನ್ನು ತಂದಿತು.|ಪ|

ಕೆಂದುಟಿಯ ರಂಗು ನೆನೆದು
ಹೃದಯ ಬಿಸಿಯಾಯಿತು.
ಆ ನೀಲಿ ಕಣ್ಣುಲಿ ಹೇಗೋ
ಮನ ಕಳೆದು ಹೋಯಿತು.|೧|

ಬಾಹುಬಂಧನಕೆ ತೋಳು
ಪರಿತಪಿಸಿ ಚಾಚಿವೆ.
ಬೆಳದಿಂಗಳ ತಂಪು ಏಕೋ
ಎದೆಯ ಬಿಸಿಗೆ ಕಾರಣವೆ!|೨|

ಸೆರಗ ಹಾಸಿ ಸಮ್ಮೊಹನದಿ
ನಿಶೆಯು ನಶೆಯ ತಂದಿತು.
ಸಂಗಾತಿ ನಿನ್ನಯ ನೆನಪು
ಮನದ ತುಂಬಾ ತುಂಬಿತು.|೩|

✍🏼 ತ್ರಿನೇತ್ರಜ

ಶಿವಕುಮಾರ. ಹಿರೇಮಠ.
9945915780
shivakumarh13
@gmail.com

Comments

Popular posts from this blog

ರೈತ ಚೀತ್ಕಾರ

[09/04, 12:43 p.m.] ಭಾವಗೀತೆ * ರೈತ ಚೀತ್ಕಾರ * ಕನಸೇ ಕಮರಿಹೋಯಿತು ಬದುಕೇ ಬಾಡಿಹೋಯಿತು ರೈತನಾಗಿ ಹುಟ್ಟಬಾರದೋ ಮತ್ತೆ ರೈತನಾಗಿ ಹುಟ್ಟಬಾರದೋ||ಪ|| ಸಾಲ ಮಾಡಿ ಎತ್ತೊಂದ ತಂದೆ ಸಿಡಿಲು ಬಡಿದು ಸತ್ತಿತಲ್ಲೋ ದೇವ ನಿನ್ನ ಕರುಣೆ ಎಲ್ಲೊ ಜಂಘಾಬಲ ಉಡುಗಿತಲ್ಲೋ ನನ್ನ ಬಲವೆಲ್ಲ ಕುಸಿಯಿತಲ್ಲೋ||೧|| ಚಿನ್ನದ ಬೆಳೆಯು ನೂರಾಸೆ ತೋರಿ ಅತಿವೃಷ್ಟಿಗೆ ಸಿಲುಕಿತಲ್ಲೋ ಕೆಸರ ಸೇರಿ ಕೊಳೆಯಿತಲ್ಲೋ ಸಾಲ ದೆವ್ವವಾಯಿತಲ್ಲೋ ಕಣ್ಣಲಿ ನೆತ್ತಾರ ತಂದಿತಲ್ಲೋ ||೨|| ಆಳೋ ಜನಕೆ ಅಧಿಕಾರದಾಸೆ ಮತಕಾಗಿ ನೆನೆದುಬರುವರೋ ಪೊಳ್ಳು ಬರವಸೆಯ ತೂರಿಬಿಡುವರೋ ಉಳುವವನಿಗೆ ಆಸರೆ ಯಾರೋ ಯಮ ಕಿಂಕರರು ಬಂದು ನಿಂತರೋ||೩|| ✍ *ತ್ರಿನೇತ್ರಜ*

*ಅನುಪಮ*

ಹನಿ ಹನಿ ತುಂತುರು ತಿಂಗಳ ವಿಶೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಭಾವಗೀತೆ         *ಅನುಪಮ*        ಹೆಣ್ಣಾಗಿ ಮೂಡಿಹಳು ಅದಮ್ಯ ಸೌಮ್ಯ ಶಕ್ತಿಯೇ ಬಣ್ಣಿಸಲು ಅಸದಳವೊ ಭಾವನಾ ಅಂಬುದಿಯೇ |ಪ| ಮಗುವಾಗಿ ನಗುವಾಗಿ ಅಮಿತ ಅನಿತೆ ಪೂಜಿತೆ ಒಡಹುಟ್ಟಿದ ಜೀವಗಳಿಗೆ ಮಿಡಿವ ಪ್ರೇಮ ಶೋಭಿತೆ|೧| ಸ್ನೇಹ ತೋರಿ ಸಖಿಯಾಗಿ ಹೃದಯಗೆದ್ದ ಅರಸಿಯಾಗಿ ಬಾಳಿನ ಅರ್ಧಾಂಗಿಯಾಗಿ ಬಾಳಿಸುವಳು ಗೃಹಿಣಿಯಾಗಿ|೨| ಮನ ನಿನ್ನದು ಹೂವಂತೆ ತನುವದೋ ಲತೆಯಂತೆ ಬರಡನಳಿಸೊ ಸೆಲೆಯಂತೆ ಮನೆಗೆ ನಂದಾ ದೀಪದಂತೆ |೩| ಮಮತೆಗೆ ಮಾತೃರೂಪಿಣಿ ಕ್ಷಮೆಗೆ ಭೂ ಸ್ವರೂಪಿಣಿ ಜ್ಞಾನದೊಳು ಶ್ರೀ ವಾಣಿ ನಮಿಸುವೆ ಸೃಷ್ಟಿಕಾರಿಣಿ |೪|        ................. ✍🏼 ತ್ರಿನೇತ್ರಜ  ಶಿವಕುಮಾರ. ಹಿರೇಮಠ. 🥀🥀🥀🥀🥀 ಹನಿ ಹನಿಯ ತುಂತುರು ಕಾವ್ಯ ಲೋಕದಲಿ... ಮೈಮರೆಸುವ ಕವಿಹೃದಯಗಳ ಕಾವ್ಯಗಳ ಸಾಗರ ದಲ್ಲಿ ಮನವಿಂದು ಮಿಂದು ಧನ್ಯವಾಗಿದೆ... 🦋🦋🦋🦋🦋🦋 *ಹನಿ ಹನಿ ತುಂತುರು ತಿಂಗಳ ವಿಶೇಷ ಸ್ಪರ್ಧೆಯ ಫಲಿತಾಂಶಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಸುಸ್ವಾಗತ...*  *ಈ ತಿಂಗಳ  ಸ್ಪರ್ಧೆಯ ವಿಷಯ* *ಒಂದು ಹೆಣ್ಣು ಗಂಡಿನ ಜೀವನದಲ್ಲಿ ತಾಯಿಯಾಗಿ ತಂಗಿಯಾಗಿ ಮಡದಿಯಾಗಿ ಗೆಳತಿಯಾಗಿ ತಂಗಿಯಾಗಿ ಪ್ರೇಯಸಿಯಾಗಿ ಹೆಂಡತಿಯಾಗಿ ಗಂಡಿನ...

*ಆನಂದನ ಗರ್ವಭಂಗ*

ಮಕ್ಕಳ ಗೀತೆ  *ಆನಂದನ ಗರ್ವಭಂಗ*  ಆಂಟಿಯ ಜೊತೆಗೆ ಪೇಟೆಗ್ಹೋಗಿ ಬೆಲೂನು ತಂದನು ಆನಂದ ಬೀದಿ ಮಕ್ಕಳ ಹೊಟ್ಟೆ ಉರಿಸಲು ಅವನಿಗೆ ಅದೇನೋ ಆನಂದ ಜಂಭದಿ ನಡೆದನು ಆಡುತ ಪುಗ್ಗೆಯ ಡುಬ್ಡುಬ್ ಡುಬ್ ಟುಬ್ ಬಡಿಯುತ್ತ ತನಗೆ ಸರಿಸಮ ಯಾರಿಲ್ಲೆಂದು ಎರಡ್ಹೆಜ್ಜೆಗೆ ಒಂದ್ಸಾರಿ ನೆಗೆಯುತ್ತ. ಅವನಾರ್ಭಟಕೆ ಬೀದಿಯ ನಾಯಿ ಗುರುಗುಟ್ಟಿ ಎಗರಿತು ಬೌ ಎಂದು ಚಿಟ್ಟನೆ ಚೀರಿ ಕೈಬಿಟ್ಟು ಬೆಲೂನು ಬೊಬ್ಬಿಟ್ಟನು ಬೆದರಿ ಆನಂದು ಹಾರಿತು ಪುಗ್ಗೆಯು ಎತ್ತರೆತ್ತರಕ್ಕೆ ತೆಂಗಿನ ಗರಿಚುಚ್ಚಿ ಢಬ್ಬ್ ಅಂತು ಮಕ್ಕಳೆಲ್ಲರೂ ಪಕಪಕ ನಕ್ಕರು ಆನಂದನ ಜಂಭವು ಠ್ಠುಸ್ಸಂತು ........ ....... ...... ....... ✍🏼 ತ್ರಿನೇತ್ರಜ್ ಶಿವಕುಮಾರ. ಹಿರೇಮಠ