ಭಾವಗೀತೆ
ಕನ್ನಡವೆಮ್ಮಯ ನುಡಿಸಿರಿ

ಕನ್ನಡವೆಮ್ಮುಯ ನುಡಿಸಿರಿ
ಕರುನಾಡೆ ನಮ್ಮ ಐಸಿರಿ|ಪ|
ಮಲೆನಾಡಿನ ಮಧುರ ಕನ್ನಡ
ಮಂಜುಳ ಗಾನದಂತೆ.
ಬಯಲುಸೀವೆಯ ಗಟ್ಟಿ ಕನ್ನಡ
ಫಿರಂಗಿ ಗುಂಡಿನಂತೆ.
ಮೈಸೂರಿನ ಮುದ್ದು ಕನ್ನಡ
ಮಲ್ಲಿಗೆಯು ಅರಳಿದಂತೆ.
ಗಡಿನಾಡಿನಲಿ ಉಲಿವ ಕನ್ನಡ
ಜೇನ್ ಬೆರೆತ ಹಾಲಿನಂತೆ...|೧|
ರನ್ನ,ಪೊನ್ನರ,ಪಂಪ ಜನ್ನರ
ಜೀವವಾಣಿ ಈ ನುಡಿಯು.
ಕುಮಾರವ್ಯಾಸರು ರಾಘವಾಂಕರು ಹಾಡಿಹ ರಸಝರಿಯು.
ಶರಣರ ವಚನ ದಾಸರ ಪದಗಳ, ಜನಪದ ಸಾಹಿತ್ಯದ ಬೀಡು
ಅಷ್ಟ ಜ್ಞಾನಪೀಠ ಗೌರವ ಪಡೆದಿಹ ಭುವನೇಶ್ವರಿಯ ಹೊನ್ನಾಡು.|೨|
✍🏼 _ತ್ರಿನೇತ್ರಜ_
ಶಿವಕುಮಾರ.ಹಿರೇಮಠ.
9945915780
shivakumarh13@gmail. com
Comments
Post a Comment